`ಸ್ನೇಹಿತರು` ಚಿತ್ರದ ಚಿತ್ರೀಕರಣ ಪೂರ್ಣ
Posted date: 16 Mon, Jul 2012 ? 02:09:03 PM

ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ‘ಸ್ನೇಹಿತರು ಚಿತ್ರಕ್ಕಾಗಿ ರಾಂನಾರಾಯಣ್ ಹಾಗೂ ಶಿವಮೊಗ್ಗ ಶ್ಯಾಂ ಅವರು ಬರೆದಿರುವ ‘ನಾನು ಇಲ್ಲಿ ಎಲ್ಲರಿಗೂ ಸ್ನೇಹಿತ ನನ್ನ ಸ್ನೇಹ ಬಯಸೋರ್ಗೆ ಸ್ವಾಗತ ನಾನು ನಿಮ್ಮ ಕಂದನೆಂದು ಹರಸುತ ನೀಡಿ ನಿಮ್ಮ ಪ್ರೀತಿ ನನಗೆ ಶಾಶ್ವತ ಎಂಬ ಹಾಡಿನ ಚಿತ್ರೀಕರಣ ಮೈಸೂರು ಲ್ಯಾಂಪ್ಸ್‌ನಲ್ಲಿ ನಡೆಯಿತು. ಕಲೈ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣದಲ್ಲಿ ಮಾ||ಸ್ನೇಹಿತ್, ವಿಜಯಸಾರಥಿ ಹಾಗೂ ಬಾಲ ಕಲಾವಿದರು ಅಭಿನಯಿಸಿದ್ದರು. ಈ ಗೀತೆಯನ್ನು ಹರಿಕೃಷ್ಣ, ವಾಣಿಹರಿಕೃಷ್ಣ ಹಾಗೂ ಆದಿಹರಿಕೃಷ್ಣ ಹಾಡಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣರ ಮಗ ಆದಿಹರಿಕೃಷ್ಣ ಹಾಡಿರುವ ಪ್ರಥಮ ಚಲನಚಿತ್ರಗೀತೆಯಿದು.
     ‘ಮಸ್ತ್ ಮಜಾ ಮಾಡಿ, ‘ಅಪ್ಪುಪಪ್ಪು ಎಂಬ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ ಮಾ||ಸ್ನೇಹಿತ್ ಈ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
     ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ‘ಸ್ನೇಹಿತರು ಚಿತ್ರಕ್ಕಿದೆ.
    ವಿಜಯರಾಘವೇಂದ್ರ, ತರುಣ್‌ಚಂದ್ರ, ರವಿಶಂಕರ್, ಸೃಜನ್‌ಲೋಕೇಶ್, ಪ್ರಣೀತಾ, ಮಾ||ಸ್ನೇಹಿತ್, ಶರಣ್, ರಮೇಶ್‌ಭಟ್, ಗಿರಿಜಾಲೋಕೇಶ್, ನಿಖಿತಾ, ಶೋಭ್‌ರಾಜ್, ಬುಲೆಟ್‌ಪ್ರಕಾಶ್, ಸಿಹಿಕಹಿಚಂದ್ರು, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ, ವಿ.ಮನೋಹರ್, ಮೋಹನ್‌ಜುನೇಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed